ಅಮೃತ ಚಿತ್ರ ಸಂಸ್ಥೆಯಲ್ಲಿ ಶ್ರೀನಿವಾಸ್ ಭೂಪತಿ ಹಾಗೂ ಬಿ.ಎಸ್.ಮನೋಹರ್ ನಿರ್ಮಿಸುತ್ತಿರುವ ೭೪೧೧೧೯೦೪೨೯ ಮೊಬೈಲ್ ಸಂಖ್ಯೆ ಹೊಂದಿರುವ ಚಿತ್ರಕ್ಕೆ ಈಗಾಗಲೇ ಚಿಕ್ಕಬಳ್ಳಾಪುರ, ನಂದಿಬೆಟ್ಟ, ಚಿಂತಾಮಣಿ, ವಾಣಿವಿಲಾಸ್ಸಾಗರ್ಡ್ಯಾಂ ಹಾಗೂ ಹಿರಿಯೂರು ಸುತ್ತಮುತ್ತ ಸತತವಾಗಿ ಚಿತ್ರೀಕರಣ ನಡೆಸಿ ಮಾತಿನ ಭಾಗದ ಚಿತ್ರೀಕರಣ ಪೂರೈಸಿದೆ. ಚಿತ್ರದಲ್ಲಿ ೪ ಹಾಡುಗಳಿದ್ದು ಈ ಹಾಡುಗಳ ಚಿತ್ರೀಕರಣ ಸದ್ಯದಲ್ಲೇ ನಡೆಯಲಿದೆ.
ರಾಜೀವ್ ಕೃಷ್ಣ ಗಾಂಧಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪೌಲ್ ರಾಜ್ ಛಾಯಾಗ್ರಹಣ, ನಾಗರಾಜ್ ವಿಡ್ಡೋಬನಹಳ್ಳಿ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದ್ದಾರೆ. ಕಿಶೋರ್ ಸಂಗೀತ ಮತ್ತು ಸಾಹಿತ್ಯ, ಕೊಲ್ಲೂರು ಬಾಲು ಸಾಹಸ, ಎಸ್.ಎಸ್.ಕೆ.ಸಂದೀಪ್ ನೃತ್ಯ ನಿರ್ದೇಶನ, ಆರ್.ಡಿ.ರವಿ ಸಂಕಲನವಿದೆ. ಗೋಪಿಕರ್ ಶೃತಿ ಹೀರಾ, ಬೂಪತಿ, ವರ್ಷಿತ, ಮನೋಹರ್, ಕಿಲ್ಲರ್ ವೆಂಕಟೇಶ್, ಬ್ಯಾಂಕ್ ಜನಾರ್ಧನ್, ಹೊನ್ನವಳ್ಳಿ ಕೃಷ್ಣ, ಶಶಿಕಲಾ, ಕಿಂಗ್ ಮೋಹನ್, ಮುರಳೀ ಕೃಷ್ಣ, ಜ್ಯೋತಿ ತಾರಾಬಳಗದಲ್ಲಿದ್ದಾರೆ.